ಟ್ರೆಂಡಿಂಗ್
Karna Serial: ʼಕರ್ಣʼ ಬರೋಕೆ ಮುಹೂರ್ತ ಫಿಕ್ಸ್; ಈ ಸೀರಿಯಲ್ಗಾಗಿ ಜನಪ್ರಿಯ ಧಾರಾವಾಹಿಯ ಟೈಮ್ ಬದಲು..!
ಕರ್ಣ ಧಾರಾವಾಹಿಗಾಗಿ ಯಾವ ಧಾರಾವಾಹಿ ಮುಕ್ತಾಯವಾಗುತ್ತಿದೆ ಎಂಬ ಪ್ರಶ್ನೆಯೂ ಎದ್ದಿದೆ. ಶ್ರೀರಸ್ತು-ಶುಭಮಸ್ತು ಮುಗಿಯುತ್ತದೆ ಎಂದು ಹೇಳಲಾಗಿತ್ತು. ಆದರೆ ಅದಿನ್ನೂ ಕಥೆ ಮುಂದುವರಿಯುತ್ತಿದೆ. ಆದರೆ ಜನಪ್ರಿಯ ಸೀರಿಯಲ್ ಒಂದರ ಸಮಯ ಬದಲಾಗಲಿದೆ.

Karna Serial will telecast soon
Photo : Twitter
ಜೀ ಕನ್ನಡದಲ್ಲಿ ಕರ್ಣ ಎನ್ನುವ ಧಾರಾವಾಹಿ ಪ್ರಸಾರವಾಗುತ್ತದೆ ಎಂದು ಹೇಳಲಾಗಿತ್ತು. ಕರ್ಣ ಧಾರಾವಾಹಿಯ ಪ್ರೋಮೋಗಳನ್ನ ಕೂಡ ಜೀ ಕನ್ನಡ ವಾಹಿನಿ ಆಗಾಗ ಶೇರ್ ಮಾಡಿಕೊಳ್ಳುತ್ತಿತ್ತು. ಆದರೆ ಕರ್ಣ ಸೀರಿಯಲ್ ಯಾವಾಗಿನಿಂದ ಪ್ರಸಾರ ಆಗುತ್ತದೆ? ಯಾವ ಧಾರಾವಾಹಿ ಮುಕ್ತಾಯ ಆಗುತ್ತದೆ ಎಂದು ಗೊತ್ತಿರಲಿಲ್ಲ. ಆದರೆ ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಕರ್ಣ ಧಾರಾವಾಹಿಯ ಟೆಲಿಕಾಸ್ಟ್ ಟೈಮ್ನ್ನ ವಾಹಿನಿಯು ಪೋಸ್ಟ್ ಮಾಡಿದೆ..
ಯಾವಾಗಿನಿಂದ? ಎಷ್ಟೊತ್ತಿಗೆ ಪ್ರಸಾರ?
ಕಿರಣ್ ರಾಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದೇ ಈ ಧಾರಾವಾಹಿ ಬಗ್ಗೆ ಸೀರಿಯಲ್ ಪ್ರಿಯರಲ್ಲಿ ಕುತೂಹಲ ಹೆಚ್ಚಾಗಲು ಕಾರಣ. ಅಂದಹಾಗೇ, ಕರ್ಣ ಸೀರಿಯಲ್ ಜೀ ಕನ್ನಡ ವಾಹಿನಿಯಲ್ಲಿ ಜೂ.16ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 8ಗಂಟೆಗೆ ಪ್ರಸಾರಗೊಳ್ಳಲಿದೆ. ಅಂದರೆ ಮುಂದಿನ ವಾರದಿಂದಲೇ ಕರ್ಣ ನಿಮ್ಮ ಮನೆಗೆ ಬರಲಿದ್ದಾನೆ..ಇನ್ನು ಕರ್ಣ ಧಾರಾವಾಹಿಗಾಗಿ ಯಾವ ಧಾರಾವಾಹಿ ಮುಕ್ತಾಯವಾಗುತ್ತಿದೆ ಎಂಬ ಪ್ರಶ್ನೆಯೂ ಎದ್ದಿದೆ. ಶ್ರೀರಸ್ತು-ಶುಭಮಸ್ತು ಮುಗಿಯುತ್ತದೆ ಎಂದು ಹೇಳಲಾಗಿತ್ತು. ಆದರೆ ಅದಿನ್ನೂ ಕಥೆ ಮುಂದುವರಿಯುತ್ತಿದೆ. ಇನ್ನೂ ಕಥೆ ಬಾಕಿ ಇದ್ದ ಸೀತಾರಾಮ ಮುಕ್ತಾಯಗೊಂಡಿದೆ. ಸೀತಾರಾಮಕ್ಕೆ ಟಿಆರ್ಪಿ ಇರಲಿಲ್ಲ. ಜೊತೆಗೆ ವೈಷ್ಣವಿ ಗೌಡ ಮದುವೆ ಕೂಡ ನಡೆಯುವುದಿತ್ತು. ಹೀಗಾಗಿ ಸದ್ಯ ಒಂದು ಸ್ಲಾಟ್ ಅಂತೂ ಖಾಲಿ ಇದೆ. ಸದ್ಯ ಪ್ರತಿದಿನ 8ಗಂಟೆಗೆ ಲಕ್ಷ್ಮೀ ನಿವಾಸ ಸೀರಿಯಲ್ ಪ್ರಸಾರಗೊಳ್ಳುತ್ತಿದೆ. ಆದರೆ ಇತ್ತೀಚೆಗೆ ಸೀರಿಯಲ್ ಕಥೆ ಬಗ್ಗೆ ಜನ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯ ಪಾತ್ರವಾದ ಲಕ್ಷ್ಮೀ ಪಾತ್ರಧಾರಿಯೇ ಈ ಸೀರಿಯಲ್ನಲ್ಲಿ ಕಾಣಿಸಿಕೊಳ್ಳದೆ ಕಥೆ ಸಾಗುತ್ತಿದೆ. ಹೀಗಾಗಿ ಲಕ್ಷ್ಮೀ ನಿವಾಸ ಧಾರಾವಾಹಿ ಸಮಯ ಬದಲಾಗಲಿದೆ. ಆ ಜಾಗಕ್ಕೆ ಕರ್ಣ ಬರಲಿದ್ದಾನೆ.
ಕರ್ಣದಲ್ಲಿ ಖ್ಯಾತ ನಟ ಕಿರಣ್ ರಾಜ್ ಹೀರೋ. ಕನ್ನಡತಿಯಿಂದ ಖ್ಯಾತಿ ಪಡೆದು, ಸಿನಿಮಾಗಳಲ್ಲಿ ಪಾತ್ರ ಮಾಡಿ ಮತ್ತೆ ಕಿರುತೆರೆಯ ಕಡೆಗೆ ಮುಖ ಮಾಡಿದ್ದಾರೆ. ಕರ್ಣದಲ್ಲಿ ಕಿರಣ್ ರಾಜ್ದು ವೈದ್ಯನ ಪಾತ್ರ. ವೈದ್ಯಕೀಯ ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿರುತ್ತಾರೆ. ಹಾಗೇ, ಇಬ್ಬರು ನಾಯಕಿಯರು ಇದ್ದಾರೆ. ಒಬ್ಬರು ಗೀತಾ ಸೀರಿಯಲ್, ಬಿಗ್ಬಾಸ್ ಖ್ಯಾತಿಯ ಭವ್ಯಾ ಗೌಡ, ಇನ್ನೊಬ್ಬರು ನಾಗಿಣಿ ಸೀರಿಯಲ್ ಮತ್ತು ಬಿಗ್ಬಾಸ್ ಖ್ಯಾತಿಯ ನಮ್ರತಾ ಗೌಡ. ಇವರಿಬ್ಬರೂ ಕೂಡ ಡಾಕ್ಟರ್ಗಳೇ ಆಗಿರ್ತಾರೆ. ಇಬ್ಬರು ನಾಯಕಿಯರು, ಒಬ್ಬ ನಾಯಕನ ಈ ಧಾರಾವಾಹಿ ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಧಾರಾವಾಹಿಯನ್ನ ಶ್ರುತಿ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ.
ಸಿನಿಮಾ ಕೂಡ ಬರ್ತಿದೆ..
ಕಿರಣ್ ರಾಜ್ ಅವರು ಧಾರಾವಾಹಿಯೊಂದಿಗೆ ಸಿನಿಮಾವನ್ನೂ ಮಾಡುತ್ತಿದ್ದಾರೆ. ಅವರುʼಜಾಕಿ 42ʼ ಎಂಬ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಫಸ್ಟ್ಲುಕ್ ಈಗಾಗಲೇ ರಿಲೀಸ್ ಆಗಿದೆ. ಗುರುತೇಜ್ ಶೆಟ್ಟಿ ಅವರು ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಕಿರಣ್ ರಾಜ್ ಅವರ ರಾನಿ ಸಿನಿಮಾವನ್ನೂ ಗುರುತೇಜ್ ಶೆಟ್ಟಿ ಅವರೇ ನಿರ್ದೇಶನ ಮಾಡಿದ್ದರು. ಬ್ಲಿಂಕ್ ಸಿನಿಮಾದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಮತ್ತು ಕನ್ನಡತಿ ಧಾರಾವಾಹಿಗೆ ಕಥೆ ಬರೆದಿದ್ದ ವಿಕಾಸ್ ನೆಗಿಲೋನಿ ಜೊತೆಯಾಗಿ ಜಾಕಿ 42ಗೆ ಕಥೆ ಬರೆದಿದ್ದಾರೆ. ಭಾರತಿ ಸತ್ಯನಾರಾಯಣ್ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ.Lakshmi Hegde author
ಲಕ್ಷ್ಮೀ ಹೆಗಡೆ ಅವರು 2024ರ ಏಪ್ರಿಲ್ ನಿಂದ ಟೈಮ್ಸ್ ನೌ ಸುದ್ದಿ (Times Now Suddi)-ಕನ್ನಡ ಡಿಜಿಟಲ್ನಲ್ಲಿ Senior Copy Editor ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮತ್ತು ...ಇನ್ನಷ್ಟು ನೋಡಿ
ಲೇಖನ ಮುಗಿದಿದೆ
Subscribe to our daily Entertainment Newsletter!
ಇತ್ತೀಚಿನ ಸುದ್ದಿ
Gold State: ದೇಶದಲ್ಲಿನ ಚಿನ್ನದ ರಾಜ್ಯ ಯಾವುದು ? ಚಿನ್ನದ ರಾಜ್ಯದ ರಾಜನಲ್ಲಿ ಎಷ್ಟು ಬಂಗಾರವಿದೆ?
BIG BREAKING: ಇನ್ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್ನಲ್ಲಿ ಪತನ
Karnataka Dam Water Level: ರೈತರ ಮೊಗದಲ್ಲಿ ಮಂದಹಾಸ, ಹೆಚ್ಚಿದ KRS ಒಳಹರಿವು, ತುಂಬುವ ಹಂತಕ್ಕೆ ಕಬಿನಿ; ಇಂದಿನ ಜಲಾಶಯಗಳ ನೀರಿನಮಟ್ಟ
Paytm stock price today: ಹಣಕಾಸು ಸಚಿವಾಲಯದ ಒಂದೇ ಒಂದು ಟ್ವೀಟ್ ಗೆ One97 ಕಮ್ಯುನಿಕೇಷನ್ಸ್ ಷೇರುಗಳಲ್ಲಿ ಅಲ್ಲೋಲ ಕಲ್ಲೋಲ..!
Hair Fall: ಮಳೆಗಾಲದಲ್ಲಿ ಕೂದಲು ಉದುರುವ ಸಮಸ್ಯೆ! ಈ ಆರೈಕೆಯಿಂದ ನಿಮ್ಮ ಕೂದಲನ್ನು ರಕ್ಷಿಸಿ